ಬಿಜೆಪಿ ವೈಯಕ್ತಿಕ ದ್ವೇಷದಲ್ಲಿ ತೊಡಗಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಠಾಕೂರ್, ‘ಪ್ರಭಾವಿ ಭೂಗಳ್ಳರಾದ ಅಲಿ ಮೊಹಮ್ಮದ್ ಸಾಗರ್ (ನ್ಯಾಷನಲ್ ಕಾನ್ಫರೆನ್ಸ್ ಪ್ರಧಾನ ಕಾರ್ಯದರ್ಶಿ), ಫಾರೂಕ್ ಅಬ್ದುಲ್ಲಾ (ಮಾಜಿ ಮುಖ್ಯಮಂತ್ರಿ), ಮುಜಾಫರ್ ಶಾ (ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ) ವಿರುದ್ಧ ಬಾಬಾ ಕಾ ಬುಲ್ಡೋಜರ್ ಕೆಲಸ ಮಾಡುತ್ತದೆ. ಸಾಮಾನ್ಯ ಜನರನ್ನು ಮುಟ್ಟುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.