ಬಾಂಗ್ಲಾದೇಶದಶಾಲ್ಡಾ ನದಿ ಸಮೀಪ ಗ್ರಾಮದ ಎಮಾನ್ ಹೊಸೈನ್ ಬಂಧಿತ ಯುವಕ. ಆಗಾಗ್ಗೆ ತನಗೆ ಇಷ್ಟದ ಭಾರತದ ಚಾಕೋಲೆಟ್ ಖರೀದಿಸಲು ಈಜಿಕೊಂಡು ನದಿ ಮೂಲಕ ತ್ರಿಪುರದ ಸಿಪಹಿಜಲ ಜಿಲ್ಲೆಗೆ ಬರುತ್ತಿದ್ದ. ಮುಳ್ಳುತಂತಿ ಬೇಲಿ ದಾಟಿ ಕಲಾಂಚೂರು ಗ್ರಾಮದಲ್ಲಿ ಚಾಕೋಲೆಟ್ ಖರೀದಿಸಿ ವಾಪಸ್ಸು ತೆರಳುತ್ತಿದ್ದ. ಯಾವುದೇ ದಾಖಲೆ ಇಲ್ಲದೆ ಭಾರತ ಗಡಿ ಪ್ರವೇಶಮಾಡಿದ್ದಕ್ಕಾಗಿ ಯುವಕನನ್ನು ಏ.14 ರಂದು ಬಿಎಸ್ಎಫ್ ಬಂಧಿಸಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದೆ. 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸೊನಾಮುರಾದ ಡಿಎಸ್ಪಿ ಬಾನೋಜ್ ದಾಸ್ ತಿಳಿಸಿದ್ದಾರೆ.