‘ಯಾವ ವ್ಯವಸ್ಥೆಯೂ ಕಾನೂನಿಗಿಂತ ದೊಡ್ದದಲ್ಲ. ಆದರೆ ಮಾಧ್ಯಮಗಳನ್ನು ಬೆದರಿಸುವ ಹಾಗೂ ಪತ್ರಕರ್ತರು, ಮಾಧ್ಯಮ ಸಂಸ್ಥೆಗಳ ಸ್ವತಂತ್ರ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶಿಸುವ ಯತ್ನಗಳನ್ನು ಖಂಡಿಸುತ್ತೇವೆ’ ಎಂದು ಎನ್ಬಿಡಿಎ ಹೇಳಿದೆ. ‘ಕೆಲವು ವಿದ್ಯಮಾನಗಳು ಹಾಗೂ ವ್ಯಕ್ತಿಗಳನ್ನು ವಿಮ ರ್ಶಾತ್ಮಕವಾಗಿ ಚಿತ್ರಿಸಿದ ಮಾಧ್ಯಮ ಸಂಸ್ಥೆಗಳ ಮೇಲೆ ಶೋಧ ನೆಯ ಅಸ್ತ್ರ ಪ್ರಯೋಗಿಸುವ ಕೇಂದ್ರ ಸರ್ಕಾರದ ನಡೆಯು,
ನಾಗರಿಕರು ಹಾಗೂ ಸಂಘಟನೆಗಳಲ್ಲಿ ಕಳವಳ ಮೂಡಿಸಿದೆ’ ಎಂದು ಬೃಹನ್ ಮುಂಬೈ ಪತ್ರಕರ್ತರ ಸಂಘಟನೆ ಹೇಳಿದೆ.