‘ರಾಜಭವನದಲ್ಲಿರುವ 6 ಮಂದಿ ವಿಶೇಷ ಕರ್ತವ್ಯ ಅಧಿಕಾರಿಗಳು ನನ್ನ ಸಂಬಂಧಿಕರೆಂದು ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಟ್ವೀಟ್ ಮೂಲಕ ಮಾಡಿರುವ ಆರೋಪ ನಿಜವಲ್ಲ. ವಿಶೇಷ ಕರ್ತವ್ಯ ಅಧಿಕಾರಿಗಳು ಮೂರು ರಾಜ್ಯಗಳವರಾಗಿದ್ದು, ನಾಲ್ಕು ಭಿನ್ನ ಸಮುದಾಯಗಳಿಗೆ ಸೇರಿದವರು. ಅವರು ಯಾರೂ ನನ್ನ ಕುಟುಂಬದ ಆಪ್ತರಲ್ಲ. ಆ ಪೈಕಿ ನಾಲ್ವರಂತೂ ನನ್ನ ಸಮುದಾಯ, ರಾಜ್ಯದವರೂ ಅಲ್ಲ’ ಎಂದು ಧನಖರ್ ಟ್ವೀಟ್ ಮಾಡಿದ್ದಾರೆ.