ಹೌರಾದತ್ತ ಹೊರಡುವ ಮುನ್ನ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅಧಿಕಾರಿ ಅವರು,‘ಹಿಂಸಾರೂಪದ ಪ್ರತಿಭಟನೆ ವೇಳೆ ದಾಳಿಗೆ ಸಿಲುಕಿದ ನಮ್ಮ ಪಕ್ಷದ ಕಚೇರಿಗೆ ಭೇಟಿ ನೀಡುತ್ತೇನೆ. ನಿಷೇಧಾಜ್ಞೆ ಹೇರಲಾದ ಸ್ಥಳಗಳಿಗೆ ತೆರಳದಂತೆ ಪೊಲೀಸರು ನನಗೆ ಹೇಳಿದ್ದಾರೆ. ಆದರೆ, ನಿರ್ಬಂಧ ಆದೇಶಗಳನ್ನು ಉಲ್ಲಂಘಿಸಿ, ನಾನೊಬ್ಬನೇ ಅಲ್ಲಿಗೆ ಹೋಗುತ್ತೇನೆ. ಒಂದು ವೇಳೆ ಪೊಲೀಸರು ನನ್ನನ್ನು ತಡೆದರೆ, ಸೋಮವಾರ ನ್ಯಾಯಾಲಯಕ್ಕೆ ಹೋಗುತ್ತೇನೆ’ ಎಂದು ಹೇಳಿದರು.