ಈ ಬಗ್ಗೆ ರಾಜಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, 'ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸ್ಥಳ ಮತ್ತು ಸಮಯದ ಬಗ್ಗೆ ರಾಜ್ಯಪಾಲರಿಗೆ ತಿಳಿಸಲಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಖಟಕಡಕಲಾನ್ಗೆ ಬರಲು ಪಂಜಾಬ್ನ ಎಲ್ಲ ಜನರನ್ನು ಆಹ್ವಾನಿಸುತ್ತೇನೆ. 16ರಂದು ನಾವು ಮತ್ತು ನಮ್ಮ ಸಚಿವರಲ್ಲದೆ ಇಡೀ ಪಂಜಾಬ್ ಜನರು ಪಂಜಾಬ್ನ ಸಮೃದ್ಧಿಗಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾವೆಲ್ಲ ರಾಜ್ಯದ ಅಭಿವೃದ್ಧಿಗೆ ಒಟ್ಟಾಗಿ ಕೈಜೋಡಿಸುತ್ತೇವೆ' ಎಂದು ತಿಳಿಸಿದ್ದರು.