‘ಭಾರತ್ ಜೋಡೊದ ಸಂದೇಶವು ಯಾತ್ರೆ ಹಾದುಹೋಗುವ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಈಗಾಗಲೇ ಹಲವಾರು ರಾಜ್ಯ ಮಟ್ಟದ ಯಾತ್ರೆಗಳನ್ನು ಘೋಷಿಸಲಾಗಿದೆ. ಮುಂಬರುವ 'ಹಾಥ್ ಸೆ ಹಾಥ್ ಜೋಡೊ ಅಭಿಯಾನ' ಯಾತ್ರೆಯ ಸಂದೇಶವನ್ನು ಮತ್ತಷ್ಟು ಪಸರಿಸಲಿದೆ. ಪ್ರತಿಯೊಬ್ಬ ಭಾರತೀಯನ ಮನೆ ಬಾಗಿಲಿಗೆ ಯಾತ್ರೆ ತಲುಪಲಿದೆ’' ಎಂದು ಪಕ್ಷದ ವಕ್ತಾರ ಜೈರಾಮ್ ರಮೇಶ್ ಹೇಳಿದ್ದಾರೆ.