‘ಶ್ರೀರಂಗಂನ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಈ ಹಿಂದೆ ಹಲವು ಬಾರಿ ನಾನು ಭೇಟಿ ನೀಡಿದ್ದು ಇಲ್ಲಿ ಭರತನಾಟ್ಯದ ಪ್ರದರ್ಶನವನ್ನೂ ನೀಡಿದ್ದೇನೆ. ಇದೇ ಮೊದಲ ಬಾರಿಗೆ ದೇವಸ್ಥಾನ ಪ್ರವೇಶಿಸದಂತೆ ನನ್ನನ್ನು ತಡೆಯಲಾಯಿತು. ರಂಗರಾಜನ್ ನರಸಿಂಹನ್ ಎಂಬುವವರ ಆಜ್ಞೆಯ ಮೇರೆಗೆ ಧರ್ಮದ ಆಧಾರದಲ್ಲಿ ನನಗೆ ಪ್ರವೇಶ ನಿರಾಕರಿಸಿ ನನ್ನನ್ನು ಹೊರಹಾಕಲಾಯಿತು’ ಎಂದು ಹುಸೇನ್ ಹೇಳಿದರು.