'ನಮ್ಮ ಭಾಷೆ, ನಮ್ಮ ವಿಜ್ಞಾನ' ಕುರಿತು ಆಯೋಜಿಸಲಾಗಿದ್ದ ಸಂವಾದದಲ್ಲಿ ಲೇಖಕ ಕೊಳ್ಳೇಗಾಲ ಶರ್ಮ ಭಾಗವಹಿಸಿ ಮಾತನಾಡಿದರು. "ವಿಜ್ಞಾನ ಸಂವಹನವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಪಾಡ್ಕಾಸ್ಟ್ ನಂತಹ ಹೊಸ ವಿಧಾನಗಳನ್ನು ಬಳಸುವುದು ಅಗತ್ಯ. ಆದರೆ ಚಾಟ್ ಜಿಪಿಟಿಯಂತಹ ಆವಿಷ್ಕಾರಗಳಲ್ಲಿ ನಾವು ಭಾರತೀಯ ಭಾಷೆಗಳನ್ನೂ ಬಳಸುವಂತಾಗಲು ಹೆಚ್ಚುಹೆಚ್ಚು ಪಠ್ಯವೂ ಸೃಷ್ಟಿಯಾಗಬೇಕು," ಎಂದು ಅವರು ಹೇಳಿದರು. ವಿಜ್ಞಾನ್ ಪ್ರಸಾರ್ ಮುಖ್ಯ ವಿಜ್ಞಾನಿ ಡಾ. ಟಿ. ವಿ. ವೆಂಕಟೇಶ್ವರನ್ ಸಂವಾದವನ್ನು ನಡೆಸಿಕೊಟ್ಟರು.