ಕಳ್ಳಬಟ್ಟಿ ದುರಂತದಲ್ಲಿ ಮಡಿದವರಿಗೆ ಪರಿಹಾರ ನೀಡುವಂತೆ ಅವರು ಬಿಜೆಪಿ ನಾಯಕ, ಬಿಹಾರ ವಿರೋಧ ಪಕ್ಷದ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರು ತಮ್ಮ ಪಕ್ಷದ ಪರವಾಗಿ ನಿಲುವಳಿ ಮಂಡಿಸಿದರು. ಮದ್ಯ ನಿಷೇಧ ಕಾನೂನಲ್ಲಿರುವ ಅವಕಾಶಗಳು ಮತ್ತು ಈ ಹಿಂದೆ ಕಳ್ಳಬಟ್ಟಿ ದುರಂತವೊಂದರಲ್ಲಿ ಮಡಿದಿದ್ದವರ ಕುಟುಂಬಗಳಿಗೆ ಪರಿಹಾರ ನೀಡಿದ್ದರ ಉದಾಹರಣೆ ನೀಡಿ ಅವರು ಮಾತನಾಡಿದರು. ಸರನ್ ಕಳ್ಳಬಟ್ಟಿ ದುರಂತದಲ್ಲಿ ಮಡಿದವರ ಕುಟುಂಬಗಳಿಗೂ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.