ಹರಿನಿವಾಸ್ ಗುಪ್ತಾ, ಜಿತೇಂದ್ರ ನಾಥ್ ಸಿಂಗ್ ಹಾಗೂ ಕೋಮಲ್ ರಾಮ್ ವಜಾಗೊಂಡ ಅಧಿಕಾರಿಗಳು. 2014 ಫೆ.12ರಿಂದ ಅನ್ವಯವಾಗುವಂತೆ ಈ ಅಧಿಕಾರಿಗಳನ್ನು ವಜಾಗೊಳಿಸಲಾಗಿದ್ದು, ನಿವೃತ್ತಿ ನಂತರದ ಯಾವುದೇ ಸೌಲಭ್ಯಗಳು ಇವರಿಗೆ ದೊರಕುವುದಿಲ್ಲ ಎಂದು ರಾಜ್ಯ ಆಡಳಿತ ಇಲಾಖೆಯು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಗುಪ್ತಾ, ಸಮಸ್ತಿಪುರದಲ್ಲಿ ಕೌಟುಂಬಿಕ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದರು.