ನೀಲಂ ಮೃತ ಮಹಿಳೆ. ಮಗಳ ಮದುವೆಗೆಂದು ಪಡೆದ ಸಾಲವನ್ನು ಮರು ಪಾವತಿಸಿಲ್ಲ ಎಂಬ ಕಾರಣಕ್ಕೆ ಶಕೀಲ್ ಮಿಯಾನ್ ಮತ್ತು ಆತನ ಸಹಚರ ಶನಿವಾರ ಜನನಿಬಿಡಮಾರುಕಟ್ಟೆಯಲ್ಲಿ ಹಾಡುಹಗಲೇ ದಾಳಿ ನಡೆಸಿ ಮಹಿಳೆಯ ಕೈ, ಕಿವಿ, ಕಾಲು, ಸ್ತನವನ್ನು ಕತ್ತರಿಸಿದ್ದರು. ಮಾರಣಾಂತಿಕ ದಾಳಿಯಿಂದ ಬದುಕಿಳಿದ ಮಹಿಳೆ ಓಡಿ ತಪ್ಪಿಸಿಕೊಂಡಿದ್ದಾರೆ. ಆದರೆ ಆಕೆ ಎಚ್ಚರ ತಪ್ಪಿ ಬೀಳುವವರೆಗೆ ಯಾರೂ ಕೂಡ ಆಕೆಯ ಸಹಾಯಕ್ಕೆ ಧಾವಿಸಿಲ್ಲ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.