ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ. ಪಾರ್ದಿವಾಲಾ ಸದಸ್ಯರಾಗಿದ್ದ ಪೀಠವು ಈ ತೀರ್ಮಾನ ತೆಗೆದುಕೊಂಡಿತು. ಅರ್ಜಿದಾರರ ಪರ ವಕೀಲರಾದ ಶೋಭಾ ಗುಪ್ತಾ ಅವರು, ಪ್ರಕರಣದ ತುರ್ತು ವಿಚಾರಣೆ ಅಗತ್ಯವಿದ್ದು, ವಿಶೇಷ ಪೀಠ ರಚಿಸಬೇಕು ಎಂದು ಪ್ರಾರ್ಥಿಸಿದ್ದರು.