ನಗರದ ಪಿಡಿಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಹಿಂದೂ–ಮುಸ್ಲಿಂ ಸಮುದಾಯದ ನಡುವೆ ಗಲಭೆ ಹಬ್ಬಿಸುವುದೇ ಬಿಜೆಪಿಯ ಕಾರ್ಯಾಸೂಚಿಯಾಗಿದೆ. ಈ ಎರಡೂ ಸಮುದಾಯಗಳ ಸಾಮರಸ್ಯವನ್ನು ಹಾಳು ಮಾಡಲು ಬಿಜೆಪಿ ಬಯಸಿದೆ. ಚುನಾವಣೆಗಳನ್ನು ಗೆಲ್ಲುವ ಸಲುವಾಗಿ ರಾಷ್ಟ್ರೀದ ಪ್ರಾಚೀನ ಕೋಮು ಸೌಹಾರ್ದತೆಯ ಮೇಲೆ ದಾಳಿ ನಡೆಸುತ್ತಿದೆ’ ಎಂದು ದೂರಿದರು.