ಸೌರಾಷ್ಟ್ರ ಪ್ರದೇಶದ ಭಾವ್ನಗರದಲ್ಲಿ ₹6,000 ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸೌರಾಷ್ಟ್ರ ನರ್ಮದಾ ಅವತರಣ ನೀರಾವರಿ (ಎಸ್ಎಯುಎನ್ಐ) ಯೋಜನೆ ಜಾರಿಗೊಳಿಸುವ ಮೂಲಕ ಟೀಕಾಕಾರರ ಆರೋಪ ತಪ್ಪು ಎಂಬುದನ್ನು ಸಾಬೀತು ಮಾಡಿದ್ದೇವೆ ಎಂದು ಹೇಳಿದ್ದಾರೆ.