ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘2016ರಲ್ಲಿ ಕಾಂಗ್ರೆಸ್ ಮತಗಳನ್ನು ಪಡೆದು ನೇಮಮ್ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿತ್ತು. ನಂತರ 2021ರಲ್ಲಿ ಈ ಕ್ಷೇತ್ರವನ್ನು ಸಿಪಿಎಂ ಗೆದ್ದುಕೊಂಡಿದೆ. ಕೇರಳದಲ್ಲಿ ಕಮಲ ಅರಳಿಸುವ ಬಗ್ಗೆ ಅಮಿತ್ ಶಾ ಮಾತನಾಡುತ್ತಾರೆ. ಆದರೆ, ಕೇರಳದಲ್ಲಿ ಅರಳಿದ್ದ ಒಂದೇ ಒಂದು ಕಮಲದ ಹೂವು ಈಗ ಕೊಳೆತು ಹೋಗಿದೆ’ ಎಂದರು.