‘ಬಿಜೆಪಿ ರೀತಿಯ ಸಿದ್ಧಾಂತ ಆಧರಿತ ಪಕ್ಷಗಳು ಭವಿಷ್ಯದಲ್ಲಿ ಉಳಿಯಲಿದ್ದು, ಕುಟುಂಬ ಆಧರಿತ ಪಕ್ಷಗಳು ನಿರ್ನಾಮವಾಗಲಿವೆ’ ಎಂಬುದಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇತ್ತೀಚೆಗೆ ಹೇಳಿದ್ದರು. ‘ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ. ಅವು ಅಸ್ತಿತ್ವದಲ್ಲಿರಬಾರದು ಎಂಬುದು ಬಿಜೆಪಿ ಅಧ್ಯಕ್ಷರ ನಿಲುವು. ಅವರ ಪಕ್ಷ ಮಾತ್ರ ಉಳಿಯಬೇಕು ಎಂಬುದು ಅವರ ಉದ್ದೇಶವಾಗಿದೆ. ಇದರರ್ಥ ಪ್ರಾದೇಶಿಕ ಪಕ್ಷಗಳನ್ನು ನಿಧಾನವಾಗಿ ಮುಗಿಸುವುದು ಬಿಜೆಪಿ ಉದ್ದೇಶ. ನಿತೀಶ್ ಸಹ ಇದನ್ನೇ ಆರೋಪಿಸಿದ್ದರು’ ಎಂದು ಪವಾರ್ ಹೇಳಿದರು.