ಪ್ರಧಾನಿ ಮೋದಿ ನೇತೃತ್ವದಲ್ಲಿ ಪುದುಚೇರಿಯ ಸರ್ವಾಂಗೀಣ ಅಭಿವೃದ್ಧಿ: ನಡ್ಡಾ ಭರವಸೆ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಿಂದ ಪುದುಚೇರಿಯ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭರವಸೆ ನೀಡಿದ್ದಾರೆ.
ಬಿಜೆಪಿ, ಪಕ್ಷೇತರ ಶಾಸಕರು ಮತ್ತು ಬಿಜೆಪಿಯ ಪುದುಚೇರಿ ಘಟಕದ ಅಧ್ಯಕ್ಷರನ್ನೊಳಗೊಂಡ ನಿಯೋಗವು ಗುರುವಾರ ನಡ್ಡಾ ಅವರನ್ನು ಭೇಟಿಯಾಗಿತ್ತು.
ನಿಯೋಗದ ಜತೆ ಮಾತುಕತೆ ಬಳಿಕ ಟ್ವೀಟ್ ಮಾಡಿರುವ ನಡ್ಡಾ, ‘ಪುದುಚೇರಿ ಶಾಸಕರ ನಿಯೋಗವನ್ನು ಭೇಟಿಯಾದೆ. ನಮ್ಮ ಪರ ಜನಾದೇಶ ನೀಡಿದ ಪುದುಚೇರಿಯ ಜನರಿಗೆ ಆಭಾರಿಯಾಗಿದ್ದೇವೆ. ಎನ್ಡಿಎ ಸರ್ಕಾರದಿಂದ ಪುದುಚೇರಿಯ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ’ ಎಂದು ಉಲ್ಲೇಖಿಸಿದ್ದಾರೆ.
Met a delegation of MLAs from Puducherry today. We are grateful to the people of Puducherry for giving us such a mandate.
We assure that under the leadership of Hon’ble PM Shri @narendramodi Ji, NDA Govt. will ensure all round development of Puducherry. pic.twitter.com/hfXwQ21mJE— Jagat Prakash Nadda (@JPNadda) July 1, 2021
ಸ್ಪೀಕರ್ ಎಂಬಲಂ ಆರ್ ಸೆಲ್ವಂ, ಮತ್ತು ಬಿಜೆಪಿಯ ಪುದುಚೇರಿ ಘಟಕದ ಅಧ್ಯಕ್ಷ ವಿ. ಸ್ವಾಮಿನಾಥನ್, ಎ. ನಮಶಿವಾಯಂ, ಕೆ.ಲಕ್ಷ್ಮಿನಾರಾಯಣನ್, ಎಕೆ ಸಾಯಿ ಜೆ ಶ್ರವಣಕುಮಾರ್, ಪಿಎಂಎಲ್ ಕಲ್ಯಾಣ್ ಸೌಂದರಂ, ರಿಚರ್ಡ್ಸ್ ಜಾನ್ಕುಮಾರ್, ಎಂ.ಶಿವಶಂಕರ್, ಜಿ. ಅಶೋಕ್ ಶ್ರೀನಿವಾಸ್, ವಿಪಿ ರಾಮಲಿಂಗಂ ಮತ್ತು ಆರ್ಬಿ ಅಶೋಕ್ ಬಾಬು ನಿಯೋಗದಲ್ಲಿ ಇದ್ದರು.
ಓದಿ: ದೆಹಲಿಯಲ್ಲಿ ಸಚಿವರು, ಬಿಜೆಪಿ ನಾಯಕರ ಸಭೆ: ಲಸಿಕೆ, ರಾಜಕೀಯ ಬೆಳವಣಿಗೆ ಚರ್ಚೆ
ನಡ್ಡಾ ಜತೆ ಭೇಟಿಗೂ ಮುನ್ನ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಪುದುಚೇರಿಯ ಅಭಿವೃದ್ಧಿ ಬಗ್ಗೆ ಮಾತುಕತೆ ನಡೆಸಿತ್ತು.
ಬಳಿಕ ಟ್ವೀಟ್ ಮಾಡಿದ್ದ ಮೋದಿ, ‘ಪುದುಚೇರಿ ಶಾಸಕರ ನಿಯೋಗದ ಜತೆ ಮಾತುಕತೆ ನಡೆಸಿದೆ. ಪುದುಚೇರಿಯ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಮಾತುಕತೆ ನಡೆಸಿದೆ’ ಎಂದು ಉಲ್ಲೇಖಿಸಿದ್ದರು.
Met a delegation of MLAs from Puducherry. Discussed the various efforts for Puducherry's all-round development. pic.twitter.com/sK4fUMOR3E
— Narendra Modi (@narendramodi) July 1, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.