‘ಕಂದ ಷಷ್ಠಿ ಕವಚಂ’ ಹೆಸರು ಕೆಡಿಸಿದ ಯುಟ್ಯೂಬ್ ಚಾನೆಲ್ ‘ಕರುಪ್ಪರ್ ಕೂಟಂ’ ಹಿಂದೆ ಡಿಎಂಕೆ ಕೈವಾಡವಿದ್ದು, ಇದನ್ನು ಜನರ ಮುಂದಿಡಲು ಈ ಯಾತ್ರೆಯನ್ನು ಕೈಗೊಳ್ಳುತ್ತಿರುವುದಾಗಿ ಮುರುಗನ್ ತಿಳಿಸಿದರು. ‘ವೆೆಟ್ರಿವೇಲ್’, ‘ವೀರವೇಲ್’ ಎಂಬ ಘೋಷಣೆಯೊಂದಿಗೆ ತಿರುಟ್ಟಾನಿಯಿಂದ ತಮ್ಮ ವಾಹನದಲ್ಲಿ ಯಾತ್ರೆಯನ್ನು ಆರಂಭಿಸಿದ ಮುರುಗನ್ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರನ್ನು ತಡೆದು ಪೊಲೀಸರು, ನಂತರ ಅವರನ್ನು ವಶಕ್ಕೆ ಪಡೆದರು.