ಇದೇ ವೇಳೆ ಎಐಯುಡಿಎಫ್ ಪಕ್ಷದ ಅಧ್ಯಕ್ಷ ಬದ್ರೂದ್ದೀನ್ ಅಜ್ಮಲ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅಮಿತ್ ಶಾ, 'ಅಸ್ಸಾಂನ ಅಧಿಕಾರ ಯಾರ ಬಳಿ ಇರಬೇಕು ಎಂಬುದನ್ನು ನಮ್ಮ ಪಕ್ಷ ತೀರ್ಮಾನಿಸಲಿದೆ ಎಂದು ಅಜ್ಮಲ್ ಹೇಳಿದ್ದಾರೆ. ಆದರೆ, ಅಧಿಕಾರವನ್ನು ಯಾರ ಕೈಗಳಿಗೆ ನೀಡಬೇಕೆಂದು ಇಲ್ಲಿನ ಜನರು ನಿರ್ಧರಿಸಲಿದ್ದಾರೆ. ಅಸ್ಸಾಂ ರಾಜ್ಯವನ್ನು ಒಳ ನುಸುಳುಕೋರರ ಕೇಂದ್ರವಾಗಿಸಲು ಬಿಜೆಪಿಯು ಅವಕಾಶ ನೀಡುವುದಿಲ್ಲ' ಎಂದು ತಿಳಿಸಿದ್ದಾರೆ.