ಸುಮಾರು ₹7.37 ಕೋಟಿ ನಗದು ಬಹುಮಾನವನ್ನೂ ಒಳಗೊಂಡ ಪ್ರಶಸ್ತಿಯನ್ನು ಗೆದ್ದಿರುವ ದಿಸಾಳೆ ಅವರನ್ನು, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ದಾರೇಕರ್ ಅವರು, ಸೊಲ್ಲಾಪುರ ಜಿಲ್ಲೆಯಲ್ಲಿ ಶನಿವಾರ ಸನ್ಮಾನಿಸಿದರು. ‘ದಿಸಾಳೆ ಅವರ ಹೆಸರನ್ನು ಶಿಫಾರಸು ಮಾಡುವ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟಿಲ್ ಹಾಗೂ ಹಿರಿಯ ನಾಯಕ ದೇವೇಂದ್ರ ಫಡಣವೀಸ್ ಅವರ ಜೊತೆ ನಾನು ಮಾತನಾಡುತ್ತೇನೆ’ ಎಂದು ದಾರೇಕರ್ ತಿಳಿಸಿದರು.