‘ವಿಷುಪುರ ಖಾನ್ವಾ ಪಟ್ಟಿ ಗ್ರಾಮದ ಬಳಿ ರೋಡ್ಶೋ ನಡೆಸುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಲಾಠಿ, ಕಲ್ಲುಗಳಿಂದ ತಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆಸಿದರು. ಹಲವರು ಗಾಯಗೊಂಡಿದ್ದಾರೆ. ಕೆಲವು ವಾಹನಗಳಿಗೆ ಹಾನಿಯಾಗಿದೆ’ ಎಂದು ಮೌರ್ಯ ಆರೋಪಿಸಿದ್ದಾರೆ. ಈ ದಾಳಿಯಲ್ಲಿ ತಮ್ಮ ವಾಹನದ ಚಾಲಕನ ಕಿವಿಗೆ ಪೆಟ್ಟು ಬಿದಿದೆ ಎಂದು ಅವರು ಹೇಳಿದ್ದಾರೆ. ಅವರಿಗೆ ಯಾವುದೇ ಗಾಯಗಳಾಗಿಲ್ಲ.