ಕೊಲೆಯಾದ ಪಂಕಜ್ ಶುಕ್ಲಾ ಅವರು ರಾತ್ರಿ ಊಟದ ಬಳಿಕ ಮಲಗಲು ದೇವಸ್ಥಾನಕ್ಕೆ ಹೋಗುತ್ತಿದ್ದರು. ಮರುದಿನ ವಾಪಸ್ ಮನೆಗೆ ಬಾರದಿದ್ದಾಗ ಅವರ ಕುಟುಂಬ ಸದಸ್ಯರು ಹುಡುಕಾಟ ನಡೆಸಿದ್ದರು. ದೇವಸ್ಥಾನದ ಆವರಣದಲ್ಲೇ ರಕ್ತಮಯಗೊಂಡುಬಿದ್ದಿರುವುದು ಪತ್ತೆಯಾಗಿದೆ. ಕುತ್ತಿಗೆ ಭಾಗಕ್ಕೆ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.