ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪ್ಪಂದ ಆಗುವವರೆಗೂ ಚೀನಾದೊಂದಿಗೆ ಗಡಿ ವಿವಾದ ಮುಂದುವರಿಯುತ್ತದೆ: ಎಂ.ಎಂ. ನರವಣೆ

Last Updated 30 ಸೆಪ್ಟೆಂಬರ್ 2021, 11:11 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ವರದಿಯಾಗುತ್ತಿರುವ ಘಟನೆಗಳು, ಎರಡೂ ದೇಶಗಳ ನಡುವೆ ಗಡಿ ಒಪ್ಪಂದ ಆಗುವವರೆಗೂ ನಡೆಯುತ್ತಲೇ ಇರುತ್ತವೆ ಎಂದು ಸೇನಾಪಡೆ ಮುಖ್ಯಸ್ಥ ಎಂ.ಎಂ. ನರವಣೆ ಗುರುವಾರ ಹೇಳಿದ್ದಾರೆ.

ಉತ್ತರಾಖಂಡದ ಬಾರ್‌ಹೋತಿ ಸೆಕ್ಟರ್ ಬಳಿ ಚೀನಾದ ‘ಪೀಪಲ್ಸ್ ಲಿಬರೇಷನ್ ಆರ್ಮಿಯು (ಪಿಎಲ್‌ಎ)’ ಕಳೆದ ತಿಂಗಳು ವಾಸ್ತವಿಕನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಉಲ್ಲಂಘಿಸಿ ಭಾರತದ ಪ್ರದೇಶದೊಳಗೆ ಪ್ರವೇಶಿಸಿದೆ ಎಂದು ವರದಿಯಾಗಿದೆ.

ವಾಣಿಜ್ಯ ಮತ್ತು ಉದ್ಯಮ ಪಿಎಚ್‌ಡಿ ಛೇಂಬರ್‌ನ ವಾರ್ಷಿಕ ಸಭೆಯಲ್ಲಿ ಚೀನಾ ಕುರಿತು ಮಾತನಾಡಿದ ನರವಣೆ,ʼನಾವು ಪ್ರಮುಖ ಗಡಿವಿವಾದಹೊಂದಿದ್ದೇವೆ. ಈ ಹಿಂದಿನಂತೆ ಸಂಭವಿಸಬಹುದಾದ ಯಾವುದೇ ದುಷ್ಕೃತ್ಯವನ್ನು ಎದುರಿಸಲು ನಾವು ಅತ್ಯುತ್ತಮವಾಗಿ ತಯಾರಿ ಮಾಡಿಕೊಂಡಿದ್ದೇವೆʼ ಎಂದು ಹೇಳಿದ್ದಾರೆ.

ʼದೀರ್ಘಾವಧಿಯ ಪರಿಹಾರವನ್ನು ಕಂಡುಕೊಳ್ಳುವವರೆಗೂ ಇಂತಹ ಘಟನೆಗಳು (ಗಡಿ ಸಂಘರ್ಷ) ನಡೆಯುತ್ತಲೇ ಇರುತ್ತವೆ. ಗಡಿ ಒಪ್ಪಂದ ಆಗಬೇಕು. ಅದು ನಮ್ಮ ಪ್ರಯತ್ನಗಳಿಗೆ ಉತ್ತೇಜನ ನೀಡುವಂತಿರಬೇಕು. ಇದರಿಂದ ಉತ್ತರ (ಚೀನಾ) ಗಡಿಯಲ್ಲಿ ಶಾಶ್ವತವಾಗಿ ಶಾಂತಿನೆಲೆಸಲು ಸಾಧ್ಯʼ ಎಂದು ತಿಳಿಸಿದ್ದಾರೆ.

ಇದೇ ವೇಳೆ ಅಫ್ಗಾನಿಸ್ತಾನದ ಸನ್ನಿವೇಶವನ್ನು ಉಲ್ಲೇಖಿಸಿ, ಭಾರತೀಯ ಸೇನೆ ಅಥವಾ ರಕ್ಷಣಾ ಪಡೆಗಳುಭಯೋತ್ಪಾದನೆಬೆದರಿಕೆಬಗ್ಗೆ ನಿಗಾ ವಹಿಸಲಿವೆ. ಅದಕ್ಕೆ ಅನುಗುಣವಾಗಿ ಅಗತ್ಯ ಕಾರ್ಯತಂತ್ರಗಳನ್ನು ರೂಪಿಸಲಾಗುವುದು. ಇದು ನಿರಂತರವಾದ ಪ್ರಕ್ರಿಯೆಯಾಗಿದ್ದು,ಎಂದಿಗೂ ನಿಲ್ಲುವುದಿಲ್ಲ ಎಂದು ತಿಳಿಸಿದ್ದಾರೆ.

ತಾಲಿಬಾನ್‌ ಸಂಘಟನೆ ಆಗಸ್ಟ್‌15 ರಂದು ಅಫ್ಗಾನಿಸ್ತಾನದ ಆಡಳಿತವನ್ನು ವಶಕ್ಕೆ ಪಡೆದಿತ್ತು. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನರವಣೆ, ಭಾರತೀಯ ಸೇನೆಯು ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಸಜ್ಜಾಗಿದೆ ಎಂದಿದ್ದಾರೆ.

ʼನಾವು ಜಮ್ಮು ಮತ್ತು ಕಾಶ್ಮೀರಲ್ಲಿ ಅತ್ಯಂತ ಪ್ರಬಲ ಉಗ್ರ ನಿಗ್ರಹ ಜಾಲವನ್ನು ಹೊಂದಿದ್ದೇವೆ. ಭಾರತದಲ್ಲಿ ಉಗ್ರಚಟುವಟಿಕೆಗಳನ್ನು ಹೆಚ್ಚಿಸುವ ಉದ್ದೇಶ ಹೊಂದಿರುವ ನಮ್ಮಪಶ್ಚಿಮನೆರೆ ರಾಷ್ಟ್ರದ (ಪಾಕಿಸ್ತಾನದ) ಪ್ರಯತ್ನಗಳಿಗೆ ಪ್ರತಿಯಾಗಿಕಾರ್ಯತಂತ್ರ ರೂಪಿಸಲಾಗಿದೆʼ ಎಂದು ಹೇಳಿದ್ದಾರೆ.

ಪಾಂಗಾಂಗ್‌ ಸರೋವರ ಪ್ರದೇಶದಲ್ಲಿ ಕಳೆದ ವರ್ಷ ಮೇ ತಿಂಗಳಲ್ಲಿನಡೆದ ಹಿಂಸಾತ್ಮಕ ಘರ್ಷಣೆಯ ಬಳಿಕ ಭಾರತ-ಚೀನಾ ಗಡಿವಿವಾದ ಉಲ್ಬಣಿಸಿದೆ. ಅದಾದ ಬಳಿಕಉಭಯ ಬಣಗಳು ಗಡಿಯಲ್ಲಿ ಸೈನಿಕರು ಮತ್ತು ಶಸ್ತ್ರಾಸ್ತ್ರ ಜಮಾವಣೆಯನ್ನು ಹೆಚ್ಚಿಸಿವೆ.

ಜುಲೈನಲ್ಲಿಸಂಭವಿಸಿದಗಾಲ್ವನ್‌ ಕಣಿವೆ ಸಂಘರ್ಷದ ನಂತರಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ.‌ ಈ ಸಂಘರ್ಷದಲ್ಲಿ ಭಾರತದ ಇಪ್ಪತ್ತಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದರು. ಇದೇ ವೇಳೆ ತಮ್ಮ ಸೇನೆಯ ಐವರು ಯೋಧರಷ್ಟೇ ಮೃತಪಟ್ಟಿದ್ದಾರೆ ಎಂದು ಚೀನಾ ಹೇಳಿಕೆ ನೀಡಿತ್ತು. ಆದರೆ, ಚೀನಾ ಪಡೆಯಲ್ಲಿ ಅದಕ್ಕಿಂತಲೂ ಹೆಚ್ಚಿನಸಂಖ್ಯೆಯ ಸಾವು ಸಂಭವಿಸಿದೆ ಎನ್ನಲಾಗಿದೆ.

ಎರಡೂ ಪಡೆಗಳು ಸದ್ಯ ಸುಮಾರು50,000 ರಿಂದ 60,000 ಸಾವಿರ ಸೈನಿಕರನ್ನು ಎಲ್‌ಎಸಿಯುದ್ದಕ್ಕೂ ನಿಯೋಜಿಸಿವೆ.

2017ರಲ್ಲಿ ದೋಕ್ಲಮ್‌ ಪ್ರದೇಶದಲ್ಲಿಭಾರತ ಮತ್ತು ಚೀನಾ ಸೇನೆಗಳು73 ದಿನಗಳಕಾಲ ಜಮಾವಣೆಗೊಂಡಿದ್ದವು. ಉಭಯಬಣಗಳು ಪರಮಾಣು ಶಸ್ತ್ರಾಸ್ತ್ರ ಹೊಂದಿರುವುದರಿಂದ ಯುದ್ಧದ ಭೀತಿ ಆವರಿಸಿತ್ತು.

ಭಾರತ ಮತ್ತು ಚೀನಾ ಗಡಿವಿವಾದ ಸುಮಾರು3,488 ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯನ್ನು ಒಳಗೊಂಡಿದೆ. ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ಗೆ ಸೇರಿದ್ದಾಗಿದೆ ಎಂದು ಚೀನಾ ವಾದಿಸುತ್ತಿದೆ. ಭಾರತ ತಿರುಗೇಟು ನೀಡುತ್ತಾ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT