ವೆಂಕಟೇಶ್ವರ ಆಸ್ಪತ್ರೆಯು ನಜಾಫ್ಗಡ ಪೊಲೀಸ್ ಠಾಣೆಗೆಗುಂಟೇಟಿನ ಕುರಿತ ಮಾಹಿತಿಯನ್ನು ನೀಡಿತು. ಹೀಗಾಗಿ ಈ ವಿಷಯ ಬೆಳಕಿಗೆ ಬಂದಿತು. ಗುಂಡೇಟು ತಿಂದಿರುವ ಸಬ್ ಇನ್ಸ್ಪೆಕ್ಟರ್ ತಮ್ಮ ಇಬ್ಬರು ಸಂಬಂಧಿ, ಮತ್ತೊಬ್ಬ ವ್ಯಕ್ತಿ ಸಂದೀಪ್ ಸೆಹ್ವಾಗ್ ಜೊತೆ ದ್ವಾರಕಾ ಪ್ರದೇಶದಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದರು. ಸೆಹ್ವಾಗ್ ಬಳಿ ಪಿಸ್ತೂಲು ಇತ್ತು ಮತ್ತು ಆತ ಅಮಲೇರಿದ ಸ್ಥಿತಿಯಲ್ಲಿ ಇದ್ದ. ಆತ ಪಿಸ್ತೂಲಿನಿಂದ ಗುಂಡು ಹಾರಿಸಿದ. ಅದು ಸಂದೀಪ್ಗೆ ತಗುಲಿತು. ಸೆಹ್ವಾಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.