ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ್ರಾ: ಖಾಸಗಿ ಬಸ್‌ ಅಪಹರಣ

ಫೈನಾನ್ಸ್‌ ಕಂಪನಿ ಏಜೆಂಟರ ಕೃತ್ಯ: ಪೊಲೀಸರ ಹೇಳಿಕೆ
Last Updated 19 ಆಗಸ್ಟ್ 2020, 11:16 IST
ಅಕ್ಷರ ಗಾತ್ರ

ಆಗ್ರಾ/ಲಖನೌ: ಹರಿಯಾಣದ ಗುರುಗ್ರಾಮದಿಂದ ಮಧ್ಯಪ್ರದೇಶದ ಪನ್ನಾ ನಗರಕ್ಕೆ ಹೊರಟ್ಟಿದ್ದ ಖಾಸಗಿ ಬಸ್‌ವೊಂದನ್ನು ಆಗ್ರಾದಲ್ಲಿ ಬುಧವಾರ ಅಪಹರಿಸಲಾಗಿದೆ.

ಹಣಕಾಸು ವಿಷಯಕ್ಕಾಗಿ ಈ ಅಪಹರಣ ನಡೆದಿದೆ. ಫೈನಾನ್ಸ್‌ ಕಂಪನಿಯೊಂದರ ಏಜೆಂಟರು ಬಸ್‌ ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕ, ಸಿಬ್ಬಂದಿ ಹಾಗೂ ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವನೀಶ್‌ ಅವಸ್ಥಿ ತಿಳಿಸಿದ್ದಾರೆ.

‘ಬಸ್‌ನಿಂದ ತಪ್ಪಿಸಿಕೊಂಡಿದ್ದ ಮೂವರು ಪ್ರಯಾಣಿಕರು ಈ ಅಪಹರಣ ಕೃತ್ಯದ ಕುರಿತು ಮಾಹಿತಿ ನೀಡಿದರು. ಈ ಬಸ್‌ ಖರೀದಿಸಲು ಸಾಲ ನೀಡಿದ್ದ ಫೈನಾನ್ಸ್‌ ಕಂಪನಿಯೇ ಬಸ್‌ಅನ್ನು ಅಪಹರಿಸಿದ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದ್ದು, ಬಸ್‌ಗಾಗಿ ಶೋಧ ಕಾರ್ಯ ನಡೆದಿದೆ’ ಎಂದು ಹಿರಿಯ ಜಿಲ್ಲಾ ಪೊಲೀಸ್‌ಅಧಿಕಾರಿ ಬಬ್ಲೂಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT