ಟಿಎಂಸಿ ಅಭ್ಯರ್ಥಿ ನಾರಾಯಣ ಗೋಸ್ವಾಮಿ ಅವರ ಪರ ಪ್ರಚಾರ ರ್ಯಾಲಿಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಇದರಲ್ಲಿ ನುಸ್ರತ್ ಅವರು ಪಾಲ್ಗೊಂಡಿದ್ದರು. ರ್ಯಾಲಿಯು ತುಂಬ ಹೊತ್ತು ನಡೆಯಿತು. ಇನ್ನೂ ಸ್ವಲ್ಪ ಹೊತ್ತು ಇರುವಂತೆ ಪಕ್ಷದ ಕಾರ್ಯಕರ್ತರು ನುಸ್ರತ್ ಅವರಲ್ಲಿ ಮನವಿ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಸಿಟ್ಟಿಗೆದ್ದ ಅವರು, ‘ನೀವೇನು ತಮಾಷೆ ಮಾಡುತ್ತಿದ್ದೀರಾ? ಒಂದು ಗಂಟೆಗೂ ಹೆಚ್ಚು ಕಾಲದಿಂದ ನಾನಿಲ್ಲಿದ್ದೇನೆ, ಮುಖ್ಯಮಂತ್ರಿ ಕಾರ್ಯಕ್ರಮದಲ್ಲೂ ನಾನು ಇಷ್ಟು ಹೊತ್ತು ಪಾಲ್ಗೊಳ್ಳುವುದಿಲ್ಲ’ ಎಂದು ಅವರು ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.