ನವದೆಹಲಿ (ಪಿಟಿಐ): ಜಾರ್ಖಂಡ್ನ ದೇವಘರ್ ರೋಪ್ವೇ ಅವಘಡದ ಬೆನ್ನಲ್ಲೇ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರತಿ ರೋಪ್ವೇ ಯೋಜನೆಯ ಸುರಕ್ಷತಾ ಪರಿಶೋಧನೆ ಕೈಗೊಂಡು, ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಈ ಬಗ್ಗೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾಳ್, ‘ಪ್ರತಿ ರೋಪ್ವೇಗಳಲ್ಲಿ ಅದರ ನಿರ್ವಹಣಾ ಕೈಪಿಡಿ ಹಾಗೂ ಕಾರ್ಯತಂತ್ರದ ವಿವರಣೆ ನೀಡಬೇಕು ಎಂದು ಹೇಳಿದೆ.
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಒಂದು ಸಮರ್ಥ ಸಂಸ್ಥೆಯನ್ನು ನಿಯೋಜಿಸಿ, ಪ್ರತಿ ರೋಪ್ವೇ ಯೋಜನೆಗಳ ಪರಿಶೋಧನೆ ಮಾಡಿಸಬೇಕು. ಹಾಗೂ ಈ ಸಮಯದಲ್ಲಿ ರೋಪ್ವೇ ಘಟಕಗಳು ಎಲ್ಲ ರೀತಿಯ ಸಹಕಾರವನ್ನೂ ನೀಡಬೇಕು’ ಎಂದು ತಿಳಿಸಿದರು.