ಸದ್ಯ, ಉತ್ತರಾಖಂಡದ ಹದ್ವಾನಿಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆಗಿರುವ ಚತುರ್ವೇದಿ ಅವರು ಕಳೆದ ವರ್ಷ ಫೆಬ್ರುವರಿಯಲ್ಲಿ ಮಂಡಳಿಯ ನೈನಿತಾಲ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಜಂಟಿ ಕಾರ್ಯದರ್ಶಿ ಮತ್ತು ಮೇಲ್ಮಟ್ಟದ ಅಧಿಕಾರಿಗಳ ಸಾಮರ್ಥ್ಯ ಓರೆಗೆ ಹಚ್ಚುವ ಕೇಂದ್ರದ 360 ಡಿಗ್ರಿ ಆಯಾಮದ ವ್ಯವಸ್ಥೆಯನ್ನು ಪ್ರಶ್ನಿಸಿದ್ದರು. ಅಲ್ಲದೆ, ಖಾಸಗಿ ವಲಯದ ಪರಿಣತರನ್ನು ಸರ್ಕಾರದಪ್ರಮುಖ ಹುದ್ದೆಗಳಿಗೆ ನೇಮಿಸುವ ಧೋರಣೆಯನ್ನು ಅವರು ಪ್ರಶ್ನಿಸಿದ್ದರು.