ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಎಫ್‌ಬಿ ಪೋಸ್ಟ್‌: ಸಿಬಿಐನಿಂದ ಐವರ ಬಂಧನ

Last Updated 8 ಆಗಸ್ಟ್ 2021, 10:54 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂಕೋರ್ಟ್‌ ಹಾಗೂ ಆಂಧ್ರಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಿದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಪಟ್ಟಾಪು ಆದರ್ಶ, ಲವನೂರು ಸಾಂಬಶಿವರೆಡ್ಡಿ, ಧಾಮಿ ರೆಡ್ಡಿ, ಪಾಮುಲ ಸುಧೀರ್‌ ಹಾಗೂ ಲಿಂಗಾರೆಡ್ಡಿ ಬಂಧಿತರು.

ಈ ಕೃತ್ಯದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಮುಖಂಡರಾದ ಲೋಕಸಭಾ ಸದಸ್ಯ ನಂದಿಗಂ ಸುರೇಶ್‌ ಹಾಗೂ ಅಮಂಚಿ ಕೃಷ್ಣಮೋಹನ್ ಅವರ ಪಾತ್ರವಿರುವ ಶಂಕೆ ಇರುವ ಕಾರಣ, ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಇವರ ಚಲನವಲನಗಳ ಮೇಲೆ ಕಣ್ಣಿಡಲಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

‘ಈ ಕೃತ್ಯದ ಹಿಂದೆ ದೊಡ್ಡ ಪಿತೂರಿಯೇ ಇರುವ ಸಂದೇಹವಿದೆ. ಇನ್ನಷ್ಟು ತನಿಖೆಯಿಂದ ಪಿತೂರಿ ಏನೆಂಬುದು ಹೊರಬೀಳಲು ಸಾಧ್ಯ’ ಎಂದು ಸಿಬಿಐ ವಕ್ತಾರ ಆರ್‌.ಸಿ.ಜೋಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT