ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 12, 2022 ರಂದು ಪ್ರತಿಭಾ ಇಂಡಸ್ಟ್ರೀಸ್ ಲಿಮಿಟೆಡ್ನ ನಿರ್ದೇಶಕರಾದ ಅಜಿತ್ ಭಗವಾನ್ ಕುಲಕರ್ಣಿ, ರವಿ ಕುಲಕರ್ಣಿ, ಸುನಂದಾ ದತ್ತಾ ಕುಲಕರ್ಣಿ ಮತ್ತು ಶರದ್ ಪ್ರಭಾಕರ ದೇಶಪಾಂಡೆ ವಿರುದ್ಧ ಬ್ಯಾಂಕ್ ಆಫ್ ಬರೋಡಾ ದೂರು ದಾಖಲಿಸಿತ್ತು. ₹4957.31 ಕೋಟಿ ಬ್ಯಾಂಕ್ ಆಫ್ ಬರೋಡಾ ನೇತೃತ್ವದ ಬ್ಯಾಂಕ್ಗಳ ಒಕ್ಕೂಟಕ್ಕೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ದೂರನ್ನು ಸ್ವೀಕರಿಸಿದ ಸಿಬಿಐ, ಹಲವು ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ದೂರು ಪರಿಶೀಲಿಸಲು ತಂಡವನ್ನು ರಚಿಸಿತ್ತು.