ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ್ದ ದೂರನ್ನು ಆಧರಿಸಿ ಸಿಬಿಐ ತನಿಖೆ ಆರಂಭಿಸಿತ್ತು.ಅಪರಾಧ ಪಿತೂರಿ ನಡೆಸಿ ಒಕ್ಕೂಟದ 10 ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳಿಗೆ ವಂಚನೆ ಮಾಡಿದ್ದ ಕಂಪನಿಯು 2009ರಿಂದ 2013ರ ಅವಧಿಯಲ್ಲಿ ಅಂದಾಜು ₹1,530 ಕೋಟಿ ಸಾಲವನ್ನು ಇತರೆ ಉದ್ದೇಶಗಳಿಗೆ ಬಳಸಿಕೊಂಡಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ರಾಮ್ ಶರಣ್ ಹಾಗೂ ನೀರಜ್ ಭಾರತದಲ್ಲಿದ್ದು, ಧೀರಜ್ ವಿದೇಶದಲ್ಲಿ ಇದ್ದುಕೊಂಡು ಕಂಪನಿಯ ಅಲ್ಲಿನ ಉದ್ಯಮವನ್ನು ನೋಡಿಕೊಳ್ಳುತ್ತಿದ್ದಾನೆ. ಈ ಕಾರಣದಿಂದ ಆರೋಪಿಗಳ ಪಾಸ್ಪೋರ್ಟ್ ಜಪ್ತಿ ಮಾಡಬೇಕು ಎಂದು ಸಿಬಿಐಗೆ ಮನವಿ ಮಾಡಿತ್ತು.