‘ಆರೋಗ್ಯ ಭದ್ರತಾ ಯೋಜನೆಯ ಕಾರ್ಯದರ್ಶಿ ಗುಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಶಾಖೆಯಲ್ಲಿ ಉಳಿತಾಯ ಖಾತೆಗಳನ್ನು ತೆರೆದಿದ್ದರು. ಆ ಖಾತೆಗಳಿಗೆ ತಲಾ ₹ 90 ಲಕ್ಷ ಜಮೆ ಮಾಡಿದ್ದರು. ಮತ್ತೊಂದು ಖಾತೆಗೆ ₹68.84 ಲಕ್ಷ ಹಾಕಿದ್ದರು. ಈ ಆರು ಮಂದಿ ಅಧಿಕಾರಿಗಳು ಖಾತೆದಾರರ ಅನುಮತಿಯಿಲ್ಲದೆಯೇ ಅಷ್ಟೂ ಹಣವನ್ನು ಅನಾಮಧೇಯ ಖಾತೆಗಳಿಗೆ ವರ್ಗಾಯಿಸಿದ್ದರು. ಬಳಿಕ ಕಾರ್ಯದರ್ಶಿಯ ಗಮನಕ್ಕೂ ತರದೆ ಅವರ ನಾಲ್ಕು ಖಾತೆಗಳನ್ನು ರದ್ದುಗೊಳಿಸಿದ್ದರು’ ಎಂದು ಸಿಬಿಐ ವಕ್ತಾರ ಆರ್.ಸಿ.ಜೋಷಿ ಮಾಹಿತಿ ನೀಡಿದ್ದಾರೆ.