ನವದೆಹಲಿ: ಕೇಂದ್ರ ತನಿಖಾ ದಳ(ಸಿಬಿಐ) ಹಣಕಾಸು ಇಲಾಖೆ ಮಾಜಿ ಕಾರ್ಯದರ್ಶಿ ಅರವಿಂದ್ ಮಯರಮ್ ಅವರ ಮನೆ ಹಾಗೂ ದೆಹಲಿ ಮತ್ತು ಜೈಪುರದಲ್ಲಿನ ಕಚೇರಿ ಮೇಲೆ ಗುರುವಾರ ದಾಳಿ ನಡೆಸಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ದಾಳಿ ನಡೆದಿದ್ದು, ಕಳೆದ 6 ಗಂಟೆಗಳಿಂದ ತಪಾಸಣೆ ಕಾರ್ಯ ನಡೆಯುತ್ತಿದೆ. ದಾಳಿ ವೇಳೆ ಕೆಲ ಪ್ರಮುಖ ದಾಖಲೆಗಳು ಲಭಿಸಿವೆ ಎಂದು ಸಿಬಿಐ ಮೂಲಗಳು ಹೇಳಿವೆ.
ಆದರೆ ಈವರೆಗೂ ಸಿಬಿಐ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಯಾವುದೇ ಬಂಧನ ಕೂಡ ವರದಿಯಾಗಿಲ್ಲ.