ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) 10, 11 ಮತ್ತು 12ನೇ ತರಗತಿಯ ಪಠ್ಯಕ್ರಮದಲ್ಲಿ ವ್ಯಾಪಕ ಬದಲಾವಣೆಗಳನ್ನು ಮಾಡಿದೆ. ಅಲಿಪ್ತ ನೀತಿ, ಶೀತಲ ಸಮರ ಯುಗ, ಆಫ್ರಿಕಾ ಮತ್ತು ಏಷ್ಯಾ ಪ್ರದೇಶದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಉದಯ, ಮೊಘಲ್ ಚರಿತ್ರೆ, ಕೈಗಾರಿಕಾ ಕ್ರಾಂತಿ, ಉರ್ದು ಮತ್ತು ಪಂಜಾಬಿ ಭಾಷೆಯ ಅತ್ಯುತ್ತಮ ಕವಿ ಎಂದು ಗುರುತಿಸಲಾಗಿರುವ ಫೈಝ್ ಅಹಮ್ಮದ್ ಫೈಝ್ ಅವರ ಕವಿತೆಗಳನ್ನು ಪಠ್ಯದಿಂದ ಕೈಬಿಡಲಾಗಿದೆ.