ಈ ವೇಳೆ ಮಾತನಾಡಿದ ಜಯದೇವ್ ಗಲ್ಲಾ, ‘ಆಂಧ್ರ ಪ್ರದೇಶದ ಮೂರು ರಾಜಧಾನಿಗಳ ವಿಚಾರವು ಸದ್ಯ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ ರಾಜಧಾನಿ ಆಯ್ಕೆ ವಿಚಾರದಲ್ಲಿ ತನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ. ರಾಜಧಾನಿ ಆಯ್ಕೆ ವಿಚಾರವು ರಾಜ್ಯ ಪಟ್ಟಿ, ಕೇಂದ್ರ ಪಟ್ಟಿ ಅಥವಾ ಸಹವರ್ತಿ ಪಟ್ಟಿಯಲ್ಲಿ ಇಲ್ಲ. ಈ ರೀತಿ ಯಾವುದೇ ಪಟ್ಟಿಯಲ್ಲಿಲ್ಲದ ವಿಚಾರದ ಶಾಸನವನ್ನು ರಚಿಸುವ ಅಧಿಕಾರ ಸಂಸತ್ತಿಗೆ ಇದೆ ಎಂದು ಸೆಕ್ಷನ್ 248 ತಿಳಿಸುತ್ತದೆ. ಆದ್ದರಿಂದ ಕೇಂದ್ರ ಸರ್ಕಾರವು ತನ್ನ ಪಾತ್ರ ನಿಭಾಯಿಸಬಹುದಾಗಿದೆ’ ಎಂದು ಹೇಳಿದ್ದಾರೆ.