ಅಮರಾವತಿ: 'ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಮರಳಿ ಅಧಿಕಾರಕ್ಕೆ ಬರಲು ಜನರನ್ನು ಭಾವನಾತ್ಮಕವಾಗಿ ಹೆದರಿಸುತ್ತಿದ್ದಾರೆ" ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರಡ್ಡಿ ಹೇಳಿದ್ದಾರೆ. ಅಲ್ಲದೇ ಜನಸೇನಾ ಪಕ್ಷದ ಪವನ್ ಕಲ್ಯಾಣ್ಅವರ ಮೇಲೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.
'ಆದರೆ, 2019 ರಂತೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾಯ್ಡು ಅವರಿಗೆ ಜನ ಪಾಠ ಕಲಿಸಲಿದ್ದಾರೆ' ಎಂದು ರೆಡ್ಡಿ ಹೇಳಿದ್ದಾರೆ. ಅವರು ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದ ವೈಎಸ್ಆರ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು.
'ನಿಜ ಹೇಳಬೇಕೆಂದರೆ ಚಂದ್ರಬಾಬು ನಾಯ್ಡು ಅವರು ನಮ್ಮ ಸರ್ಕಾರದ ಅಭಿವೃದ್ಧಿ ಕಂಡು ಸಂಪೂರ್ಣ ಹತಾಶೆಯಾಗಿದ್ದಾರೆ. ಬಿದ್ದು ಸಾಯುತ್ತೇನೆ ಎಂಬ ಅವರ ಹೇಳಿಕೆಯೇ ಅದನ್ನು ಸೂಚಿಸುತ್ತದೆ. ಕಪ್ಪಂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಂತೂ ಟಿಡಿಪಿಯನ್ನು ಜನ ಧೂಳಿಪಟ ಮಾಡಿದ್ದಾರೆ' ಎಂದು ಜಗನ್ಮೋಹನ್ ಹೇಳಿದರು.
‘ಲೂಟಿ ಬಯಸುವ ಟಿಡಿಪಿಯನ್ನು ಆಶ್ರಯಿಸುವ ಕೆಲ ಮಾಧ್ಯಮಗಳು ಮಾತ್ರ ನಮ್ಮ ವಿರುದ್ಧ ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿವೆ. ನಮ್ಮ ಸರ್ಕಾರ 2019ರ ಚುನಾವಣೆಯಲ್ಲಿ ನೀಡಿದ ಶೇ 98 ಭರವಸೆಗಳನ್ನು ಈಡೇರಿಸಿದೆ’ ಎಂದು ಅವರು ಗೋದಾವರಿ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಇನ್ನು ನಟ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ಮೇಲೂ ವಾಗ್ದಾಳಿ ನಡೆಸಿದ ರೆಡ್ಡಿ, ಜನಸೇನಾ ಎಂಬುದು ರೌಡಿ ಸೇನಾ ಆಗಿದೆ. ಅದರ ನಾಯಕ ರೌಡಿಸೇನೆಯ ದೊಡ್ಡ ರೌಡಿ ತರ ವರ್ತಿಸುತ್ತಿದ್ದಾರೆ ಎಂದಿದ್ದಾರೆ.