ಚಂದ್ರನ ದಕ್ಷಿಣ ಧ್ರುವದ ಭಾಗದಲ್ಲಿ ನೌಕೆಯನ್ನು ಇಳಿಸುವ ಗುರಿ ಹೊಂದಿದ್ದ ಚಂದ್ರಯಾನ–2 ಅನ್ನು ಜುಲೈ 22, 2019ರಲ್ಲಿ ಕಕ್ಷೆಗೆ ಉಡಾವಣೆ ಮಾಡಲಾಗಿತ್ತು. ಕಡೆಯ ಹಂತದಲ್ಲಿ ವಿಕ್ರಂ ಲ್ಯಾಂಡರ್ ಉರುಳಿದ ಕಾರಣ, ಭಾರತದ ಕನಸು ಈಡೇರಿರಲಿಲ್ಲ. ಚಂದ್ರಯಾನ–3 ಯೋಜನೆಯು ಇಸ್ರೊಗೆ ಸವಾಲಿನದ್ದಾಗಿದ್ದು, ಭಾರತದ ಸಾಮರ್ಥ್ಯ ಬಿಂಬಿಸುವಂತದ್ದಾಗಿದೆ.