ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲರ ದಾಳಿ: ಐಟಿಬಿಪಿಯ ಇಬ್ಬರು ಸಾವು

Last Updated 20 ಆಗಸ್ಟ್ 2021, 11:28 IST
ಅಕ್ಷರ ಗಾತ್ರ

ನಾರಾಯಣಪುರ್: ಛತ್ತೀಸಗಡದ ನಾರಾಯಣಪುರ ಜಿಲ್ಲೆಯಲ್ಲಿ ಶುಕ್ರವಾರ ನಕ್ಸಲರು ನಡೆಸಿದ ದಾಳಿಯಲ್ಲಿ ಐಟಿಬಿಪಿಯ (ಇಂಡೊ ಟಿಬೆಟನ್‌ ಬಾರ್ಡರ್‌ ಪೊಲೀಸ್) ಸಹಾಯಕ ಕಮಾಂಡೆಂಟ್‌ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ಸಹಾಯಕ ಕಮಾಂಡೆಂಟ್‌ ಸುಧಾಕರ್‌ ಶಿಂಧೆ, ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ಗುರುಮುಖ್‌ ಸಿಂಗ್ ಮೃತಪಟ್ಟವರು. ಐಟಿಬಿಪಿಯ ಕಡೆಮೆಟ ಶಿಬಿರದ ಬಳಿ ಕೃತ್ಯ ನಡೆದಿದೆ ಎಂದು ಬಸ್ತರ್ ವಲಯದ ಐಜಿಪಿ ಸುಂದರ್ ರಾಜ್ ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಐಟಿಬಿಪಿ ಸಿಬ್ಬಂದಿ ಶಿಬಿರಕ್ಕೆ 600 ಮೀಟರ್ ದೂರದಲ್ಲಿ ಕಾರ್ಯಾಚರಣೆ ನಡೆಸುವಾಗ ನಕ್ಸಲರ ತಂಡವೊಂದು ಗುಂಡಿನ ದಾಳಿ ನಡೆಸಿದೆ. ದಾಳಿ ಬಳಿಕ ನಕ್ಸಲರು ಎಕೆ–47 ರೈಫಲ್‌, ಎರಡು ಬುಲೆಟ್‌ ಫ್ರೂಫ್‌ ಜಾಕೆಟ್, ಒಂದು ವೈರ್‌ಲೆಸ್‌ ಸೆಟ್‌ ಅನ್ನು ಹೊತ್ತೊಯ್ದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT