ಕೊಳವೆ ಬಾವಿಯಲ್ಲಿ ಒಳಗೆ ಹಾವು ಮತ್ತು ಚೇಳುಗಳು ಇರುವುದು ಕಂಡಿದ್ದು, ಅವು ಬಾಲಕನಿಗೆ ಹಾನಿ ಮಾಡುತ್ತವೆ ಎಂಬ ಭೀತಿಯಿತ್ತು. ಆದರೆ, ಅವುಗಳಿಂದಲೂ ಯಾವುದೇ ಸಮಸ್ಯೆಯಾಗಿಲ್ಲ. ಬಾಲಕ ಸಿಲುಕಿದ್ದ ಕೊಳವೆ ಬಾವಿಗೆ ಪರ್ಯಾಯವಾಗಿ ಗುಂಡಿಯನ್ನು ತೋಡಿ, ಅದನ್ನು ಸುರಂಗವಾಗಿ ಬಳಸಿಕೊಂಡು, ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ರಕ್ಷಣೆ ಮಾಡಲಾಯಿತು ಎಂದು ರಾಷ್ಟ್ರೀಯ ವಿಪತ್ತು ನಿಗ್ರಹದ ಪಡೆಯ ಅಧಿಕಾರಿಯೊಬ್ಬರು ತಿಳಿಸಿದರು.