ರಾಯಪುರ: ಛತ್ತೀಸಗಡದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲರುಅಳವಡಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿದ್ದರಿಂದ ಇಂಡೋ–ಟಿಬೆಟ್ ಭದ್ರತಾ ಪೊಲೀಸ್ (ಐಟಿಬಿಪಿ) ಪಡೆಯ ಅಧಿಕಾರಿಯೊಬ್ಬರು ಮೃತಪಟ್ಟಿದ್ದು, ಇನ್ನೊಬ್ಬ ಯೋಧ ಗಾಯಗೊಂಡಿದ್ದಾರೆ.
ಸಹಾಯಕ ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಸಿಂಗ್ ಮೃತಪಟ್ಟ ಅಧಿಕಾರಿ, ಕಾನ್ಸ್ಟೆಬಲ್ ಮಹೇಶ್ ಗಾಯಗೊಂಡವರು. ಐಟಿಬಿಪಿಯ 53ನೇ ಬೆಟಾಲಿಯನ್ ರಸ್ತೆ ಕಾಮಗಾರಿ ನಡೆಸುವವರಿಗೆ ಭದ್ರತೆ ನೀಡಲು ಗಸ್ತುತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಐಜಿಪಿ ಪಿ.ಸುಂದರ್ರಾಜ್ ತಿಳಿಸಿದ್ದಾರೆ.