ನಮ್ಮ ನಿರ್ಧಾರದ ಕುರಿತು ಕೆಲವರು, ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಯನ್ನು ಒಂದು ರಾಜ್ಯ ಹೇಗೆ ಕಾರ್ಯರೂಪಕ್ಕೆ ತರದೆ ಇರಲು ಸಾಧ್ಯ ಎಂದೆಲ್ಲ ತಮಾಷೆ ಮಾಡಿದ್ದರು. ಅಂದು ಇದೇ ನಿರ್ಧಾರ ತೆಗೆದುಕೊಂಡಿದ್ದೆವು. ಇಂದು ಕೂಡ ಇದೇ ನಿರ್ಧಾರಕ್ಕೆ ಕಟಿಬದ್ಧರಾಗಿದ್ದೇವೆ. ನಾಳೆಯೂ ಇದೇ ನಿರ್ಧಾರವನ್ನು ತಳೆಯುತ್ತೇವೆ. ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕಾರ್ಯರೂಪಕ್ಕೆ ತರುವುದಿಲ್ಲ ಎಂದು ಸಿಎಂ ಪುನರುಚ್ಚರಿಸಿದ್ದಾಗಿ ಎಎನ್ಐ ವರದಿ ಮಾಡಿದೆ.