ಚೀನಾ ಕೃತ್ಯ ಎದುರಿಸಲು ಸೇನೆ ಸಮರ್ಥ: ಬಿಪಿನ್ ರಾವತ್

ಕೋಲ್ಕತ್ತ: ‘ಲಡಾಖ್ನಲ್ಲಿ ಉದ್ಭವಿಸಿರುವ ಗಡಿ ಬಿಕ್ಕಟ್ಟಿನ ನಡುವೆಯೇ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯು (ಪಿಎಲ್ಎ) ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಚೀನಾದ ಕೃತ್ಯಗಳನ್ನು ಎದುರಿಸಲು ಭಾರತದ ಪಡೆಗಳು ಸಮರ್ಥವಾಗಿವೆ’ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೋಮವಾರ ಹೇಳಿದ್ದಾರೆ.
‘ಚೀನಾದಂತೆ ನಾವು ಕೂಡ ನಮ್ಮ ಸ್ವಾಯತ್ತ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ಆ ರಾಷ್ಟ್ರಕ್ಕೆ ಎದಿರೇಟು ನೀಡಲು ನಾವು ತಯಾರಾಗಿದ್ದೇವೆ. ದೇಶದ ಗಡಿಯನ್ನು ಕಾಪಾಡಲು ನಮ್ಮ ಸೈನಿಕರು ಕಟಿಬದ್ಧರಾಗಿದ್ದಾರೆ’ ಎಂದೂ ನುಡಿದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.