ಗಾಂಧಿ ಮೈದಾನದ ಬಳಿಯ ಜೆ.ಪಿ. ವೃತ್ತದ ಬಳಿ ಆರಂಭವಾದ ಮೆರವಣಿಗೆ ರಾಜಭವನಕ್ಕೆ ತೆರಳಲು ಉದ್ದೇಶಿಸಲಾಗಿತ್ತು. ದಕ್ ಬಾಂಗ್ಲಾ ಮತ್ತು ತೆರಿಗೆ ಕಚೇರಿ ಬಳಿ ಪ್ರತಿಭಟನಾಕಾರರಿಗೆ ತಡೆಯೊಡ್ಡಲು ಪೊಲೀಸರು ಮುಂದಾದರು. ಆದರೆ, ಪೊಲೀಸರಿಗೂ ಜಗ್ಗದೆ ಮೆರವಣಿಗೆ ಮುಂದುವರಿದಿತ್ತು. ಈ ಸಂದರ್ಭ, ಪಾಸ್ವಾನ್ ಬೆಂಬಲಿಗರ ಮೇಲೆ ಲಾಠಿ ಪ್ರಹಾರ ಮಾಡಿದ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ.