‘ಇತ್ತೀಚಿನ ದಿನಗಳಲ್ಲಿ ಉಗ್ರರು ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಒಳಗೊಂಡತೆ ನಾಗರಿಕರ ಹತ್ಯೆ ಹೆಚ್ಚಾಗಿರುವುದು ಕಾಶ್ಮೀರದ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ನಾಗರಿಕರು ತಮ್ಮ ಪ್ರದೇಶ, ಪಟ್ಟಣ ಹಾಗೂ ನಗರಗಳಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಚಟುವಟಿಕೆಯನ್ನು ತಡೆಯಲು ಹಾಗೂ ಭಯೋತ್ಪಾದಕರನ್ನು ಕೊಲ್ಲುವ ಭರವಸೆ ನೀಡಿದ್ದಾರೆ’ ಎಂದು ಹಿರಿಯ ನಾಗರಿಕರು ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಬೆಳವಣಿಗೆಯನ್ನು ಯಾವುದೇ ಅಧಿಕೃತ ಮೂಲಗಳು ಖಚಿತಪಡಿಸಿಲ್ಲ.