‘ಸಂಪುಟ ವಿಸ್ತರಣೆ ವಿಳಂಬದಿಂದಾಗಿ ಪಕ್ಷದ ಶಾಸಕರಲ್ಲಿ ರಾವತ್ ವಿರುದ್ಧ ತೀವ್ರ ಅಸಮಾಧಾನ ಭುಗಿಲೇಳಲು ಕಾರಣವಾಗಿತ್ತು. ನಂತರ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾಮನ್ ಸಿಂಗ್ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ದುಶ್ಯಂತ್ ಕುಮಾರ್ ಗೌತಮ್ ನೇತೃತ್ವದಲ್ಲಿ ಶನಿವಾರ ಬಿಜೆಪಿ ಪ್ರಮುಖರ ಸಭೆ ನಡೆದ ನಂತರ ನಾಯಕತ್ವ ಬದಲಾವಣೆ ಬಗ್ಗೆ ಊಹಾಪೋಹಗಳು ಅಧಿಕಗೊಂಡಿದ್ದವು.