ಆದರೆ ಸೋಂಕಿನ ಎರಡನೇ ಅಲೆಯ ಅವಧಿಯಲ್ಲಿ ದೇಶದಲ್ಲಿ ಆಮ್ಲಜನಕಕ್ಕೆ ಬಹಳ ಬೇಡಿಕೆ ಇತ್ತು.ಮೊದಲ ಅಲೆಯ ಸಂದರ್ಭದಲ್ಲಿ ನಿತ್ಯ 3,095 ಟನ್ನಷ್ಟು ಇದ್ದ ಬೇಡಿಕೆ ಎರಡನೇ ಅಲೆಯಲ್ಲಿ 9,000 ಟನ್ಗಳಿಗೆ ಏರಿತು. ಆಗ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ, ರಾಜ್ಯಗಳಿಗೆ ಸಮಾನವಾಗಿ ಆಮ್ಲಜನಕ ವಿತರಣೆ ಮಾಡಬೇಕಾಯಿತು ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ಹೇಳಿತ್ತು.