ಯಾತ್ರೆ ಮಧ್ಯೆ ಎದುರಾದ ಜನರ ಜೊತೆ ಮಾತನಾಡಿದೆ. ಅವರು ಅವರ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ನಮ್ಮ ಅಹವಾಲನ್ನು ಇಲ್ಲಿನ ಆಡಳಿತ ಆಲಿಸುತ್ತಿಲ್ಲ ಎಂದು ಜನರು ಹೇಳಿದ್ದಾರೆ. ಇಲ್ಲಿನ ಸಂಪೂರ್ಣ ವ್ಯಾಪಾರ ಮತ್ತು ವಹಿವಾಟನ್ನು ಹೊರಗಿನವರು ನಡೆಸುತ್ತಿದ್ದಾರೆ. ಸ್ಥಳೀಯ ಜನ ಅಸಹಾಯಕರಾಗಿ ಕುಳಿತಿದ್ದಾರೆ ಎಂದು ರಾಹುಲ್ ಕಿಡಿಕಾರಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯಧಿಕ ಪ್ರಮಾಣದ ನಿರುದ್ಯೋಗವಿದೆ. ಇಲ್ಲಿನ ಯುವಕರು ಇಂಜಿನಿಯರ್, ಡಾಕ್ಟರ್, ವಕೀಲರಾಗುವ ಅಭಿಲಾಷೆ ಹೊಂದಿದ್ದಾರೆ. ಆದರೆ, ಅವರಿಗೆ ಆ ಸೌಲಭ್ಯ ಇಲ್ಲ ಎಂದು ರಾಹುಲ್ ಹೇಳಿದರು.