ಗೃಹ ಸಚಿವ ಅಮಿತ್ ಶಾ ಹೆಸರಿನಲ್ಲಿ ಜೂನ್ 13 ರಂದು ಉತ್ತರಾಖಂಡ ಸಿಎಂಗೆ ಈ ಪತ್ರ ಬರೆಯಲಾಗಿದೆ. ಅದರಲ್ಲಿ, ‘ಆರ್ಎಸ್ಎಸ್ ಸಿದ್ಧಾಂತಗಳನ್ನು ಪ್ರಚಾರ ಮಾಡುವಲ್ಲಿ ನೂಪುರ್ ಶರ್ಮಾ ಹಾಗೂ ಅಜಯ್ ಗುಪ್ತಾ ಅವರು ಶ್ರಮಿಸುತ್ತಿದ್ದು, ಅಂತಹವರಿಗೆ ಈಗ ಪ್ರಾಣ ಬೆದರಿಕೆ ಉಂಟಾಗಿದೆ. ಇದನ್ನು ಆದ್ಯತೆ ಎಂದು ಪರಿಗಣಿಸಿ ಅವರಿಗೆ ಕೂಡಲೇ ಉನ್ನತ ಭದ್ರತೆ ನೀಡಿ’ ಎಂದು ಹೇಳಲಾಗಿತ್ತು. ಅಲ್ಲದೇ ಅಮಿತ್ ಶಾ ಅವರ ನಕಲಿ ಸಹಿಯನ್ನು ಕೂಡ ಅದರಲ್ಲಿ ಮಾಡಲಾಗಿತ್ತು.