ಫೈಜರ್ ಲಸಿಕೆ ಪರಿಣಾಮಕಾರಿಯಾಗಿರದ ಕುರಿತು ಕಂಪನಿಯ ಸಿಇಒ ಅವರು ದಾವೋಸ್ನಲ್ಲಿ ಪತ್ರಕರ್ತರಿಂದ ಕಠಿಣ ಪ್ರಶ್ನೆಗಳನ್ನು ಎದುರಿಸಿದ್ದರು. ಇದರ ಬೆನ್ನಲ್ಲೇ, ರಾಜೀವ್ ಚಂದ್ರಶೇಖರ್, ‘ಲಸಿಕೆ ಬಳಕೆಗೆ ಸಂಬಂಧಿಸಿ ಕೆಲ ಷರತ್ತುಗಳನ್ನು ಕೈಬಿಡುವಂತೆ ಸರ್ಕಾರವನ್ನು ಫೈಜರ್ ಒತ್ತಾಯಿಸಿತ್ತು. ಅಲ್ಲದೇ, ಕಂಪನಿಯ ಈ ಕೋವಿಡ್ ಲಸಿಕೆಯನ್ನು ದೇಶದಲ್ಲಿ ಬಳಕೆಗೆ ಅನುಮೋದಿಸುವಂತೆ ರಾಹುಲ್, ಚಿದಂಬರಂ ಹಾಗೂ ಜೈರಾಮ್ ಒತ್ತಡ ಹೇರುತ್ತಿದ್ದರು ಎಂಬುದನ್ನು ಜನರಿಗೆ ನೆನಪಿಸಲು ಬಯಸುತ್ತೇನೆ’ ಎಂದು ಟ್ವೀಟ್ ಮಾಡಿದ್ದರು.